ಉಡುಪಿ: ಮೀನುಗಾರರೊಬ್ಬರು ಆಯತಪ್ಪಿ ನದಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಮೇ 8ರಂದು ಬೆಳಗ್ಗಿನ ಜಾವ ನಡೆದಿದೆ.
ಮೃತರನ್ನು ಕಲ್ಯಾಣಪುರ ಹೊನ್ನಪ್ಪಕುದ್ರುವಿನ ತನ್ಯ ತಿಂಗಳಾಯ(70) ಎಂದು ಗುರುತಿಸಲಾಗಿದೆ. ಇವರು ಮೀನುಗಾರಿಕೆ ಮಾಡುತ್ತಿರುವಾಗ ಆಯತಪ್ಪಿ ನದಿಯ ನೀರಿಗೆ ಬಿದ್ದರೆನ್ನಲಾಗಿದೆ.
ಅವರನ್ನು ಸ್ಥಳಿಯರು ಕೂಡಲೇ ಮೇಲಕ್ಕೆ ತಂದು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ತನ್ಯ ಈಗಾಗಲೇ ಮೃತ ಪಟ್ಟಿರುವು ದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿಯ ಕಲ್ಯಾಣಪುರ ಹೊನ್ನಪ್ಪಕುದ್ರುವಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಆಯತಪ್ಪಿ ನದಿಗೆ ಬಿದ್ದು ತನ್ಯ ತಿಂಗಳಾಯ (70) ಎಂಬುವವರು ಮೃತಪಟ್ಟಿದ್ದಾರೆ. ಘಟನೆ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಸುದ್ದಿ (Udupi News)
ಮೀನುಗಾರ ಸಾವು (Fisherman death)
ಕಲ್ಯಾಣಪುರ ಹೊನ್ನಪ್ಪಕುದ್ರು (Kalyanpura Honnappakudru)
ತನ್ಯ ತಿಂಗಳಾಯ (Tanya Thingalaya)
ಮಲ್ಪೆ ಪೊಲೀಸ್ ಠಾಣೆ (Malpe Police Station)
ಉಡುಪಿ ಅಪಘಾತ ಸುದ್ದಿ (Udupi Accident
News)
